ನೀನೆಲ್ಲಿಂದು

ನೀನೆಲ್ಲಿಂದು?
ಕಣ್ಮರೆಯಾದ ಚಿಕ್ಕೆ ಆಗಾಗ ಹೊಳೆದು ಕರಗುವಂತೆ
ಮನದ ಮೆಲುಕಾಟದಲ್ಲಿ ಕನಸಾಗಿ ಕಾಣುವೆ
ನಿನ್ನೊಡನಾಟದ ಹಾಲುಸಕ್ಕರೆಯ ಸವಿಯಂತೂ ನನಗಿಲ್ಲ
ಆದರೆ ಆಗಾಗ ಫಳಕ್ಕೆಂದು ಮಿಂಚಿ
ತೆರವಾದ ಬಾನಿಂದ ಮಳೆಯಂತೆ, ಅಳುವಿನಂತೆ
ಇಳೆಗಿಳಿಯುವೆ, ನೆಲವೇನೂ ತೋಯದೆ ಇದ್ದರೂ
ನನ್ನೆದೆಯ ತೊಳೆದು ಬಿಡುವೆ,
ಕಟ್ಟೆಯ ಮೇಲಿಂದ ಕೆಟ್ಟು ಬೀಳುವವನ
ಬಂದೆತ್ತುವೆ ಮಲಗಿದ್ದವನನೆಬ್ಬಿಸುವೆ
ಎತ್ತಿದ ನಿನ್ನ ಕೈಗಾಗಿ ನಾನು ತಡಕಾಡುವೆ

ನಿನ್ನ ಮೈಯೆಲ್ಲೋ ಮುಖವೆಲ್ಲೋ?
ಬಿಳಿ ಮೋಡದಲ್ಲಿ ಸುಳುವುದೋರಿ ಮರೆಯಾಗುವಿಯಲ್ಲಾ!
ಅಂದಿದ್ದವಳಿಂದಿಲ್ಲವಲ್ಲಾ ಇಂದು,
ಒಳಗಣ್ಣ ಮುಂದೊಂದು ಚಿರವಾದ ಚಿಕ್ಕೆಯಾಗಿರುವ ಇಂದು.
ಎಂದೆಂದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲೊರೇನ್
Next post ಬೇಡ ಸರಸ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys